ಮರೆಯಾದ ಚೇತನ
ಒಂದು ಚೈತನ್ಯದ ಚಿಲುಮೆಯೊಂದು ನಮ್ಮನ್ನು ಅಗಲಿತು
ಮನದ ಮೊಲೆಯಲ್ಲಿ ನೂರು ನೋವಿನ ಜ್ವಾಲೆಯ ಹುಟ್ಟುಹಾಕಿತು
ಏಕೆ ಮರೆಯಾದೆ ಓ ಚೇತನವೇ?
ನಮ್ಮನ್ನು ಅಗಲಿದೆ ಏಕೆ ಚೇತನವೇ?
ಸದಾ ನಗುಮುಖ, ಚೈತನ್ಯದ ಚಿಲುಮೆ
ಹಾಸ್ಯ,ತುಟಿಯಲ್ಲಿ ಸದಾ ನಗುವಿನ ಲಾಸ್ಯ
ಪ್ರೇರಕ ಶಕ್ತಿ,ಮನದಲ್ಲಿ ಪ್ರಶಾಂತತೆ;
ಇಂದು ಮರೆಯಾಯಿತೇಕೆ?
ಓ ಚೇತನವೇ! ಓ ಆತ್ಮಶಕ್ತಿಯೇ!
ನೀನು ನಮ್ಮಲ್ಲಿ ನೆಲೆಗೊಳ್ಳು ಎಂದೆಂದಿಗೂ
ನಿಮ್ಮ ಆತ್ಮಕ್ಕೆ ಶಾಂತಿ ಸಿಗಲಿ\\
ತುಂಬಾ ದುಃಖದ ದಿನ ಇಂದು. ನನ್ನ ಆತ್ಮೀಯ ಗೆಳೆಯ ಸುನಿಲ್ ನ ತಂದೆ ಶ್ರಿ.ಬಿ.ಗೋಪಾಲ್ ರವರು ಇಂದು ತೀರಿಕೊಂಡರು. ಸದಾ ನಗುಮುಖದ, ಚೈತನ್ಯದ ಚಿಲುಮೆಯಾದ ಅವರು ಅನಾರೋಗ್ಯದಿಂದ ಬಳಲುತ್ತಿದ್ದರು. ನನಗಂತೂ ತುಂಬಾ ನೋವಾಗಿದೆ ಮನಸ್ಸಿಗೆ. ಅವರ ಆತ್ಮಕ್ಕೆ ಚಿರಶಾಂತಿ ಆ ಪರಮಾತ್ಮ ದಯಪಾಲಿಸಲಿ. ಅವರ ಕುಟುಂಬದ ಸದಸ್ಯರಿಗೆ ಅದನ್ನು ಭರಿಸುವ ಶಕ್ತಿ ಪರಮಾತ್ಮ ನೀಡಲಿ ಎಂದು ಪ್ರಾರ್ಥಿಸುತ್ತೇನೆ.
ಶುಕ್ರವಾರ, ಅಕ್ಟೋಬರ್ 21, 2011
ಶುಕ್ರವಾರ, ಆಗಸ್ಟ್ 5, 2011
ಆಗಸ್ಟ್ ೦೧ ~ ೦೫
ಈ ವಾರ ಅಂತ ವಿಶೇಷವೆನೂ ಇಲ್ಲ. ಕರ್ನಾಟಕದ ರಾಜಕಾರಣದಲ್ಲಿ ಹಿಂದೆಂದೂ ಕಂಡರಿಯದ ರೀತಿಯಲ್ಲಿ ರಾಜಕಾರಣ ಮತ್ತಷ್ಟೂ ಅಸಹ್ಯ ಮೊಡಿಸಿತು. ನಗುಮುಖದ ಸದಾನಂದ ಗೌಡರು ಕರ್ನಾಟಕದ ೨೬ ನೇ ಮುಖ್ಯಮಂತ್ರಿಯಾದರು. ಅವರು ನಗುವ ರೀತಿಯಲ್ಲೇ ಕರ್ನಾಟಕದ ಜನತೆಯನ್ನೂ ನಗಿಸುವರೋ? ಜನತೆಯಲ್ಲಿ ಅಳುವನ್ನು ತರಿಸುವರೋ? ಕಾದು ನೋಡಬೇಕು. ನನ್ನ ಕಾರ್ಖಾನೆಯಲ್ಲಿ ಅಂತಹ ವಿಶೇಷವೇನೂ ಇಲ್ಲ. ಮನಸ್ಸಿಗೆ ತುಂಬಾ ಬೇಸರವಂತೂ ಕಾಡುತ್ತಿದೆ. ಕೊನೆ ಯಾವಾಗಲೋ? ಯಕ್ಷ ಪ್ರಶ್ನೆಯಾಗಿದೆ.
ಅಮ್ಮನ ಜೊತೆ ಜಗಳವಾಡಿದೆ. ಅಮ್ಮ ನನ್ನ ದೂರವಾಣಿ ಕರೆಯನ್ನು ಸ್ವೀಕರಿಸುತ್ತಿಲ್ಲ. ಕಾರಣ ತುಂಬಾ ಚಿಕ್ಕದಾದರೂ ಜಗಳದ ಪರಿಣಾಮ ಮಾತ್ರ ೨~೩ ದಿನಗಳು ಮನಸ್ಸಿನ ನೆಮ್ಮದಿಯನ್ನು ಹಾಳುಮಾಡಿದ್ದಂತೂ ನಿಜ.
ಅನೀಶ್ ಕಳೆದ ವಾರದಲ್ಲೇ ಜ್ವರದಿಂದ ನರಳುತ್ತಿದ್ದ ಹೀಗಾಗಿ ಶಾಲೆಗೆ ಹೋಗಲಾಗಲಿಲ್ಲ. ೫ ದಿವಸದ ಆಂಟಿಬಯೋಟೆಕ್ ಕೋರ್ಸ್ ಮುಗಿಸಿದ ನಂತರ ಗುರುವಾರದಿಂದ ಶಾಲೆಗೆ ಹೋಗುತ್ತಿದ್ದಾನೆ. ಶಾಲೆಯಲ್ಲಿ ಫ್ರೆಂಡ್ಸ್ ಶಿಪ್ ಡೇ ಆಚರಿಸಿದ.
ತಾ|| ಆಗಷ್ಟ್ ೩ ,ಅಕ್ಕನ ಮಗಳು ಕು|| ಭೂಮಿಕಾಳ ಹುಟ್ಟಿದ ಹಬ್ಬಕ್ಕೆ ಶುಭಾಷಯ ಕೋರಿದೆ. ಹಾಗೇ ಜಾಂಡೀಸ್ ನಿಂದ ಬಳಲಿ ಚೇತರಿಸಿಕೊಳ್ಳುತ್ತಿರುವ ಕು|| ಅಂಜು ಗೆ ಬೇಗ ಚೇತರಿಸಿಕೋ ಎಂದು ಹಾರೈಸಿದೆ.
ನನ್ನ ಅಣ್ಣ ಅನಂತು ಗೇ ಫೋನ್ ಮಾಡಿದ್ದೆ.
ಇನ್ನು ಶ್ರೀಮತಿಗಂತೂ ಸಂಭ್ರಮವೋ ಸಂಭ್ರಮ, ಆಷಾಡ ಮುಗಿದು ಶ್ರಾವಣದ ಹಬ್ಬಗಳ ಸಾಲು ಸಾಲು ಕೈಬೀಸಿ ಕರೆಯುತ್ತಿರುವುದು ಸಂಭ್ರಮಕ್ಕೆ ಕಾರಣವಾದರೆ ಹಬ್ಬದ ಪ್ರಯುಕ್ತ ಹೊಸ ಬಟ್ಟೆಗಳ ಖರೀದಿಯೊ ಅವಳಲ್ಲಿ ಹೊಸ ಹುಮ್ಮಸ್ಸನ್ನು ಹೆಚ್ಚಿಸಿದೆ.ಭೀಮನ ಅಮಾವಾಸ್ಯೆ, ನಾಗರ ಪಂಚಮಿ, ಮಳೆಯ ವಾತಾವರಣ ಮನದಲ್ಲಿ ಬೇಸರದ ಕ್ಷಣಗಳನ್ನು ಸ್ವಲ್ಪವಾದರೂ ಕಳೆಯಿತೆನ್ನಬಹುದು.
ಒಟ್ಟಾರೆ ಈ ವಾರ ಮಿಶ್ರ ಫಲದ ವಾರವೆಂದರೆ ತಪ್ಪಲ್ಲ.
ಅಮ್ಮನ ಜೊತೆ ಜಗಳವಾಡಿದೆ. ಅಮ್ಮ ನನ್ನ ದೂರವಾಣಿ ಕರೆಯನ್ನು ಸ್ವೀಕರಿಸುತ್ತಿಲ್ಲ. ಕಾರಣ ತುಂಬಾ ಚಿಕ್ಕದಾದರೂ ಜಗಳದ ಪರಿಣಾಮ ಮಾತ್ರ ೨~೩ ದಿನಗಳು ಮನಸ್ಸಿನ ನೆಮ್ಮದಿಯನ್ನು ಹಾಳುಮಾಡಿದ್ದಂತೂ ನಿಜ.
ಅನೀಶ್ ಕಳೆದ ವಾರದಲ್ಲೇ ಜ್ವರದಿಂದ ನರಳುತ್ತಿದ್ದ ಹೀಗಾಗಿ ಶಾಲೆಗೆ ಹೋಗಲಾಗಲಿಲ್ಲ. ೫ ದಿವಸದ ಆಂಟಿಬಯೋಟೆಕ್ ಕೋರ್ಸ್ ಮುಗಿಸಿದ ನಂತರ ಗುರುವಾರದಿಂದ ಶಾಲೆಗೆ ಹೋಗುತ್ತಿದ್ದಾನೆ. ಶಾಲೆಯಲ್ಲಿ ಫ್ರೆಂಡ್ಸ್ ಶಿಪ್ ಡೇ ಆಚರಿಸಿದ.
ತಾ|| ಆಗಷ್ಟ್ ೩ ,ಅಕ್ಕನ ಮಗಳು ಕು|| ಭೂಮಿಕಾಳ ಹುಟ್ಟಿದ ಹಬ್ಬಕ್ಕೆ ಶುಭಾಷಯ ಕೋರಿದೆ. ಹಾಗೇ ಜಾಂಡೀಸ್ ನಿಂದ ಬಳಲಿ ಚೇತರಿಸಿಕೊಳ್ಳುತ್ತಿರುವ ಕು|| ಅಂಜು ಗೆ ಬೇಗ ಚೇತರಿಸಿಕೋ ಎಂದು ಹಾರೈಸಿದೆ.
ನನ್ನ ಅಣ್ಣ ಅನಂತು ಗೇ ಫೋನ್ ಮಾಡಿದ್ದೆ.
ಇನ್ನು ಶ್ರೀಮತಿಗಂತೂ ಸಂಭ್ರಮವೋ ಸಂಭ್ರಮ, ಆಷಾಡ ಮುಗಿದು ಶ್ರಾವಣದ ಹಬ್ಬಗಳ ಸಾಲು ಸಾಲು ಕೈಬೀಸಿ ಕರೆಯುತ್ತಿರುವುದು ಸಂಭ್ರಮಕ್ಕೆ ಕಾರಣವಾದರೆ ಹಬ್ಬದ ಪ್ರಯುಕ್ತ ಹೊಸ ಬಟ್ಟೆಗಳ ಖರೀದಿಯೊ ಅವಳಲ್ಲಿ ಹೊಸ ಹುಮ್ಮಸ್ಸನ್ನು ಹೆಚ್ಚಿಸಿದೆ.ಭೀಮನ ಅಮಾವಾಸ್ಯೆ, ನಾಗರ ಪಂಚಮಿ, ಮಳೆಯ ವಾತಾವರಣ ಮನದಲ್ಲಿ ಬೇಸರದ ಕ್ಷಣಗಳನ್ನು ಸ್ವಲ್ಪವಾದರೂ ಕಳೆಯಿತೆನ್ನಬಹುದು.
ಒಟ್ಟಾರೆ ಈ ವಾರ ಮಿಶ್ರ ಫಲದ ವಾರವೆಂದರೆ ತಪ್ಪಲ್ಲ.
ಶುಕ್ರವಾರ, ಜುಲೈ 29, 2011
ಜುಲೈ ೨೫ ~೨೯
ಈ ವಾರ ಪೂರ್ತಿ ಅನಾರೋಗ್ಯ ನನ್ನ ಹಾಗು ನನ್ನ ಕುಟುಂಬವನ್ನು ಆವರಿಸಿತ್ತು. ಅತಿಯಾದ ಚಳಿಯಿಂದ ನೆಗಡಿ-ಕೆಮ್ಮು ಹಾಗು ಜ್ವರದಿಂದ ಬಳಲಿದೆವು. ಒಟ್ಟಾರೆ ಕುಟುಂಬದವರೆಲ್ಲಾ ಹಾಸಿಗೆಯನ್ನೇ ಅವಲಂಬಿಸಿದ್ದೆವು. ವಾರ ಪೂರ್ತಿ ತುಂಬಾ ಬೋರಾಯಿತು. ಆ ಬೋರಿನಲ್ಲೂ ಶ್ರೀಮತಿ ಸುಧಾಮೊರ್ತಿಯವರ " ಮನದ ಮಾತು" ಪುಸ್ತಕ ಓದಿದೆ. ಮನಸ್ಸಿಗೆ ಸ್ವಾಂತನ (ತಂಪು) ನೀಡುವ ಅನುಭವವಾಯಿತು.
ಆನೀಶ್ ಸ್ಕೂಲಿಗೆ ಚಕ್ಕರ್ ಹಾಕಿದ. ವಾರಕ್ಕೊಂದು ದಿನವಾದರೂ ಸ್ಕೂಲಿಗೆ ರಜೆ ಹಾಕುತ್ತಿದ್ದಾನೆ, ಒಂದು ರೀತಿಯ ಆತಂಕಯಿದೆ ಮನದಲ್ಲಿ ( ಆದಷ್ಟು ಅವನಿಗೆ ಶಕ್ತಿ ಬರಲಿ).
ಇನ್ನು ಶ್ರೀಮತಿ ಸೌಮ್ಯ ಅಸಿಡಿಟಿಯಿಂದ ಬಹಳ ಒದ್ದಾಡಿದಳು.
ಆನೀಶ್ ಸ್ಕೂಲಿಗೆ ಚಕ್ಕರ್ ಹಾಕಿದ. ವಾರಕ್ಕೊಂದು ದಿನವಾದರೂ ಸ್ಕೂಲಿಗೆ ರಜೆ ಹಾಕುತ್ತಿದ್ದಾನೆ, ಒಂದು ರೀತಿಯ ಆತಂಕಯಿದೆ ಮನದಲ್ಲಿ ( ಆದಷ್ಟು ಅವನಿಗೆ ಶಕ್ತಿ ಬರಲಿ).
ಇನ್ನು ಶ್ರೀಮತಿ ಸೌಮ್ಯ ಅಸಿಡಿಟಿಯಿಂದ ಬಹಳ ಒದ್ದಾಡಿದಳು.
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳು (Atom)